ಅಪರಾಧಹುಬ್ಬಳ್ಳಿ

ನವನಗರದಲ್ಲಿ “ಹುಡುಗಿ” ವಿಚಾರಕ್ಕೇ “ಕೊಲೆ”ನಾಲ್ವರು ಅಂದರ್..!

Spread the love

ಹುಬ್ಬಳ್ಳಿ: ಸುತಗಟ್ಟಿಯಲ್ಲಿ ಪ್ರೀತಿಯ ವಿಚಾರಕ್ಕೇ ನಡೆದ ಯುವಕನ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ನಾಲ್ಕು ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಸುತಗಟ್ಟಿಯಲ್ಲಿ ವಿನಯ ಎಂಬ ಕಾಲೇಜು ವಿದ್ಯಾರ್ಥಿಯನ್ನು ಪ್ರೀತಿಯ ವಿಚಾರಕ್ಕೇ ನಾಲ್ಕು ಜನ ಸೇರಿ ಕೊಲೆ ಮಾಡಿದ್ದರು,ಕೊಲೆಯಾದ ಮಾರನೇ ದಿನ ರಾಘವೇಂದ್ರ ಎಂಬಾತ ನವನಗರ ಪೊಲೀಸ್ ಠಾಣೆಗೆ ಶರಣಾಗಿ ಕೊಲೆ ನಾನೊಬ್ಬನೇ ಮಾಡಿದ್ದೇನೆ ಅಂತಾ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ.

ಆದ್ರೆ ಕಮೀಷನರ್ ಲಾಬುರಾಮ್ ಆರೋಪಿ ರಾಘವೇಂದ್ರನನ್ನು ವಿಚಾರಣೆ ಮಾಡಿದಾಗ ಕೊಲೆಗೆ ಸಹಕಾರ ಮಾಡಿದ ಇನ್ನುಳಿದ ಮೂರು ಜನ ಆರೋಪಿಗಳ ಹೆಸರನ್ನು ಬಾಯ್ಬಿಟ್ಟಿದ್ದಾನೆ.ಸಧ್ಯ ವಿನಯ ಕೊಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿಗಳನ್ನು ನವನಗರ ಠಾಣೆಯ ಪೊಲೀಸರು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page