ಶಾಸಕರ ತವರೂರಲ್ಲೇ ಮಹಿಳೆಯ ರೇಪ್..!?& ಮರ್ಡರ್..!
ಹುಬ್ಬಳ್ಳಿ: ಕುರಿಗಾಹಿ ಮಹಿಳೆಯ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರೆತಿದ್ದು, ಪೋಲಿಸರು ಕೊಲೆಗಾರರ ಕುರಿತು ಕೆಲವೊಂದಿಷ್ಟು ಪ್ರಮುಖ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೇ ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೌದು, ಶುಕ್ರವಾರ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಫಕ್ಕಿರಪ್ಪ ಹಿರೇಮನಿ (ಜಡಿತಲಿ) ಅವರ ಜಮೀನಿಗೆ ಹೊಂದಿಕೊಂಡಿರುವ ಸರುವಿನಲ್ಲಿ ಅಪರಿಚಿತ ವ್ಯಕ್ತಿ ಕುರಿಗಾಹಿ ಮಹಿಳೆಯನ್ನು ಕೊಲೆ ಗೈದು, ಮೈ ಮೇಲೆ ಇದ್ದ ಕಿವಿ ಓಲೆ, ಕೊರಳಲ್ಲಿ ಇದ್ದ ತಾಳಿ , ಕಾಲಲ್ಲಿನ ಚೈನ್ ಕದ್ದು ಪರಾರಿಯಾಗಿದ್ದನು. ಘಟನೆಯಲ್ಲಿ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ ಲಕ್ಷ್ಮಿ ಕಳ್ಳಿಮನಿ (27) ಮೃತಪಟ್ಟಿದ್ದರು. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಠಾಣೆಯ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಇದಲ್ಲದೇ ಧಾರವಾಡ ಎಸ್.ಪಿ ಕೃಷ್ಣಕಾಂತ ಕೂಡಾ ಸ್ಥಳಕ್ಕೆ ಭೇಟಿ ಕುಟುಂಬಸ್ಥರ ಹೇಳಿಕೆ ಪಡೆದು ವಾಪಾಸ್ ಆಗಿದ್ದರು.
ಆದರೆ ಕುಟುಂಬಸ್ಥರು ಮೃತ ಲಕ್ಷ್ಮಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದಾಳೆ ಹಾಗಾಗಿ ನಮಗೆ ಪೋಲಿಸರು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಇಂದು ಮೃತ ಲಕ್ಷ್ಮಿ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಶವ ಪರೀಕ್ಷೆ ನಡೆಸಲಾಯಿತು. ಆದಾಗ್ಯೂ ಪೋಲಿಸರು ಮೃತಳು ಕೊಲೆಯಾಗಿದ್ದಾಳೆಂದು ತಿಳಿಸಿದರು. ಈ ವೇಳೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು.
*ಸ್ಥಳಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರ ಭೇಟಿ:* ಇನ್ನೂ ಕಿಮ್ಸ್ ಶವಾಗಾರಕ್ಕೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶರಣು ತಳ್ಳಿಗೇರಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲದೇ ಮೃತ ಮಹಿಳೆ ಅತ್ಯಚಾರವಾಗಿದೆ ಎಂದು ಅನುಮಾನವಿದ್ದು, ಹಾಗಾಗಿ ಎಫ್ ಐಆರ್ ನಲ್ಲಿ ಅತ್ಯಾಚಾರವೆಸಗಿ ಕೊಲೆ ಎಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡು ಕೂಡಲೇ ಆರೋಪಿಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಎಸ್.ಪಿ ಕೃಷ್ಣಕಾಂತ ಕುಟುಂಬಸ್ಥರು ಮತ್ತು ಮುಖಂಡರೊಂದಿಗೆ ಮಾತನಾಡಿ ಮೃತ ದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ತಿಳಿಸಿದರು. ನಂತರ ಪೋಲಿಸರು ಎಫ್ ಐಆರ್ ನಲ್ಲಿ ರೇಪ್ ಆ್ಯಂಡ್ ಮರ್ಡರ್ ಎಂದು ಸೇರಿಸಿದಾಗ ಕುಟುಂಬಸ್ಥರು ಮೃತ ಲಕ್ಷ್ಮಿ ಕಳ್ಳಿಮನಿಯ ಶವವನ್ನು ಊರಿಗೆ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋದರು.
ಒಟ್ಟಿನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಊರಿಂದ ಊರಿಗೆ ಬಂದ ಲಕ್ಷ್ಮಿಯ ಸಾವು ನಿಜಕ್ಕೂ ದುರಂತವೇ ಸರಿ..