ವೀಕೆಂಡ್ ಕರ್ಪ್ಯೂ : ಅವಳಿನಗರದಲ್ಲಿ ಉತ್ತಮ ಪ್ರತಿಕ್ರಿಯೆ
ಹುಬ್ಬಳ್ಳಿ : ಕೊರೊನಾ ವೀಕೆಂಡ್ ಕರ್ಪ್ಯೂನ ೨ ನೇ ವಾರದ ೨ ನೇ ಭಾನುವಾರವೂ ಸಹ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೊರೊನಾ ಮಹಾಮಾರಿ ಹತ್ತಿಕ್ಕಲು ರಾಜ್ಯ ಸರ್ಕಾರ ಹೊರಡಿಸಿರುವ ವೀಕೆಂಡ್ ಕರ್ಪ್ಯೂನಿಂದಾಗಿ ಜನ ಸಂಚಾರ ವಿರಳವಿದ್ದದ್ದು ಕಂಡು ಬಂದಿತು.
ನಗರದ ಚೆನ್ನಮ್ಮ ವೃತ್ತ, ಕೇಶ್ವಾಪೂರ ಹಳೇ ಹುಬ್ಬಳ್ಳಿ ವೃತ್ತ ಸೇರಿದಂತೆ ಧಾರವಾಡದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದರು.
ನಗರದಲ್ಲಿ ಅಲ್ಲಲ್ಲಿ ಬಸ್, ಆಟೋ ಸಂಚಾರ ಕಂಡು ಬಂದಿತ್ತಾದರೂ ಕೂಡಾ ಗ್ರಾಮೀಣ ಪ್ರದೇಶಗಳಲ್ಲಿ ತೆರಳುವ ಪ್ರಯಾಣಿಕರು ಬಸ್ ಗಾಗಿ ಕಾದು ಕಾದು ಸುಸ್ತಾದರು.
ಇನ್ನೂ ವೀಕೆಂಡ್ ಕರ್ಪ್ಯೂ ಇದ್ದರೂ ನಗರದ ಪ್ರಮುಖ ಮಾರುಕಟ್ಟೆಗಳಾದ ಎಪಿಎಂಸಿ, ಜನತಾ ಬಜಾರ್, ದುರ್ಗದಬೈಲ್, ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಪರದಾಡುವಂತಾಯಿತು.
ಕಿರಾಣಿ, ಮೆಡಿಕಲ್ ಅಂಗಡಿ ಸೇರಿದಂತೆ ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧವಿಧಿಸಿರುವುದು ಕಂಡುಬಂದಿತು.