ಎಕ್ಸ್ಲುಸೀವ್ನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ
ನವನಗರ “ಪೊಲೀಸ್ ಠಾಣೆಗೆ ಮುತ್ತಿಗೆ” ಹಾಕಿದ ಹಿಂದೂ ಪರ ಹೋರಾಟಗಾರರು.!
ಹುಬ್ಬಳ್ಳಿ: ಮತಾಂತರ ಮಾಡುತ್ತಿದ್ದ ಚರ್ಚ್ ಪಾದರ್ ವಿರುದ್ಧ ದೂರು ನೀಡಿದರೂ ಕೂಡಾ ಪೊಲೀಸರು ಕ್ರಮವನ್ನು ಕೈಗೊಂಡಿಲ್ಲ ಎಂದು ಹಿಂದೂ ಪರ ಸಂಘಟನೆಗಳು ನವನಗರ ಠಾಣೆಗೆ ಮುತ್ತಿಗೆಯನ್ನು ಹಾಕಿದ್ದಾರೆ.
ನವನಗರದಲ್ಲಿ ಸೇರಿದ ನೂರಾರು ಹಿಂದೂ ಪರ ಹೋರಾಟಗಾರರು ಇಂದು ಸಂಜೆಯಿಂದಲೂ ಕೂಡಾ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದು,ಏಕಾಏಕಿ ನವನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದು ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಕೂಡಾ ಸಾಕಷ್ಟು ಹರಸಾಹಸ ಪಡುತ್ತಿದ್ದು,ಪ್ರತಿಭಟನೆಯಲ್ಲಿ ಧಾರವಾಡ ಶಾಸಕ ಅರವಿಂದ ಬೆಲ್ಲದ್ ಕೂಡಾ ಭಾಗಿಯಾಗಿದ್ದಾರೆ.