ಹುಬ್ಬಳ್ಳಿಯಲ್ಲಿ “5” ರೂಪಾಯಿಗಾಗಿ ಬಾಲಕನ “ಭೀಕರ” ಕೊಲೆ
ಹುಬ್ಬಳ್ಳಿ:ಮಿಲ್ಲತ್ತ ನಗರದಲ್ಲಿ ನಡೆದ ಬಾಲಕನ ಕೊಲೆಯ ಆರೋಪಿಯನ್ನು ಬಂದನ ಮಾಡುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಭೇದಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಸೆಟ್ಲಿಮೆಂಟ್ ನ ನಿವಾಸಿ ರವಿ ವೆಂಕಟೇಶ ಬಳ್ಳಾರಿ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ,ಕಳೆದ ಗುರುವಾರ ಸಂಜೆ 5 ಗಂಟೆಗೆ ಮಿಲ್ಲತ್ತ ನಗರದ ಬಳಿ ಇರುವ ಆಟದ ಮೈದಾನದ ಬಳಿಯಲ್ಲಿ ಆಡುತ್ತಿದ್ದ ಬಾಲಕ ನದೀಮ್ ಆರೋಪಿ ರವಿಯನ್ನು 5 ರೂಪಾಯಿ ಕೊಡು ಅಂದಿದ್ದ.
ಅದೇ ರೀತಿಯಾಗಿ ರವಿ ಬಾಲಕನಿಗೆ 5 ರೂಪಾಯಿ ಕೂಡಾ ಕೊಟ್ಟಿದ್ದ,ಆದ್ರೆ ಬಾಲಕ ನದೀಮ್ ಇನ್ನು 5 ರೂಪಾಯಿ ಕೊಡು ಅಂತಾ ರವಿಗೆ ದುಂಬಾಲು ಬಿದ್ದಿದ್ದ,ಆದ್ರೆ ರವಿ 5 ರೂಪಾಯಿ ಕೊಡದೆ ಇದ್ದಾಗ ನದೀಮ್ ರವಿಗೆ ಬೈದಿದ್ದಾನೆ.
ಇದರಿಂದ ಕೋಪಗೊಂಡ ರವಿ ನದೀಮ್ ಕೆನ್ನೆಗೆ ಹೊಡೆದ ಪರಿಣಾಮ ನದೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ನಂತರ ಬಾಲಕ ಮೇಲೆ ಏಳದೆ ಇದ್ದಾಗ,ಶವವನ್ನು ಮೈದಾನದಲ್ಲಿ ಇದ್ದ ಪೊದೆಯೊಳಗೆ ಎಸೆದು ಶವದ ಮೇಲೆ ಕಲ್ಲು ಹಾಕಿ ಪೈಶಾಚಿಕ ಕೃತ್ಯ ಮೆರೆದು ಅಲ್ಲಿಂದ ಕಾಲ್ಕಿತ್ತಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಎಲ್ಲ ಮಾಹಿತಿಗಳನ್ನು ಕಲೆ ಹಾಕಿದಾಗ ಆರೋಪಿಯಾದ ರವಿ ವೆಂಕಟೇಶ ಬಳ್ಳಾರಿ ಈ ರೀತಿಯಾದ ಪೈಶಾಚಿಕ ಕೃತ್ಯ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ.ಸದ್ಯ ಆರೋಪಿ ಈ ಹಿಂದೆ ಕೂಡಾ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ ಸದ್ಯ ಪೊಲೀಸರು ಆರೋಪಿಯನ್ನು ಬಂದನ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.