ಹುಬ್ಬಳ್ಳಿ

ನಗರದಲ್ಲಿ ಅಕ್ರಮ “ಸ್ಪಾ”ಗಳಿಗೆ ಕಡಿವಾಣ ಹಾಕಲು ಮುಂದಾದ ದಕ್ಷ ಅಧಿಕಾರಿ “ಶ್ರೀಧರ ದಂಡೆಪ್ಪನವರ”

Spread the love

ಹುಬ್ಬಳ್ಳಿ:ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿರೋ ಅಕ್ರಮಗಳಿಗೆ ಕಡಿವಾಣ ಹಾಕಲು ಇದೀಗ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿ ಮುಂದಾಗಿದ್ದು.ಇದರಿಂದ ಸ್ಪಾ ಹೆಸರಲ್ಲಿ ದುಡ್ಡು ಮಾಡಲು ಹೊರಟಿದ್ದ ಹಲವರಿಗೆ ನಿರಾಶೆ ಉಂಟಾಗಿ ಆರೋಗ್ಯ ಇಲಾಖೆಯ ಅಧಿಕಾರಿ ಹೆಸರು ಕೆಡಿಸಲು ಮುಂದಾಗಿದ್ದಾರೆ.

ನಗರದಲ್ಲಿ ನಡೆಯುತ್ತಿರೋ ಬಹುತೇಕ ಸ್ಪಾ ಗಳಿಗೆ ಈ ಹಿಂದೆ ಇದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಕ್ರಮ ಸ್ಪಾ ಗಳಿಗೆ ಅನುಕೂಲ ಮಾಡಿ ಕೊಡುವುದಲ್ಲದೆ ಹಲವರಿಗೆ ಇದರಿಂದ ಅನುಕೂಲ ಆಗಿತ್ತು.ಆದ್ರೆ ಇದರ ಬಗ್ಗೆ ಗಮನ ಹರಿಸಿದ ಪಾಲಿಕೆ ಆರೋಗ್ಯ ಇಲಾಖೆಯ ಅಧಿಕಾರಿ ಶ್ರೀಧರ ದಂಡೆಪ್ಪನವರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದರ ಪರಿಣಾಮ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಹೊಸದಾಗಿ ಸ್ಪಾ ಸ್ಟಾರ್ಟ್ ಮಾಡುವ ಕೆಲಸಕ್ಕೆ ಹಲವರು ಮುಂದಾಗಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಇದೀಗ ಹೊಸದಾಗಿ ಸ್ಪಾ ಸ್ಟಾರ್ಟ್ ಮಾಡುವ ಸಲುವಾಗಿ ಆರೋಗ್ಯ ಇಲಾಖೆಯ ಅಧಿಕಾರಿ ಶ್ರೀಧರ ದಂಡೆಪ್ಪಣ್ಣವರ ಅವರಿಗೆ ಪರವಾನಿಗೆ ಕೊಡು ಅಂತಾ ಹಲವರನ್ನು ಹಿಡಿದುಕೊಂಡು ದುಂಬಾಲು ಬಿದ್ದಿದ್ದಾರೆ.ಆದ್ರೆ ದಕ್ಷ ಅಧಿಕಾರಿಯಾದ ಶ್ರೀಧರ ದಂಡೆಪ್ಪನವರ ಪರವಾನಿಗೆ ಕೊಡದ ಹಿನ್ನೆಲೆಯಲ್ಲಿ ಹಲವರು ಅಸಮಾಧಾನ ಹೊಂದಿದ್ದು. ದಕ್ಷ ಅಧಿಕಾರಿ ಶ್ರೀಧರ ದಂಡೆಪ್ಪಣ್ಣವರ ಹೆಸರನ್ನು ಕೆಡಿಸಲು ಮುಂದಾಗಿದ್ದಾರೆ.

ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಯಾದ ಶ್ರೀಧರ ದಂಡೆಪ್ಪನವರ ಚಿಟಗುಪ್ಪಿ ಆಸ್ಪತ್ರೆಗೆ ಅಧಿಕಾರಿಯಾಗಿ ಬಂದ ನಂತರ ಸಾಕಷ್ಟು ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಿಂದ ಉಪಕರಣಗಳನ್ನು ತಂದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಬಡವರ ಪಾಲಿನ ಬಂದುವಾಗಿದ್ದರೆ, ಆದ್ರೆ ಸ್ಪಾ ಹೆಸರಲ್ಲಿ ಲೈಸೆನ್ಸ್ ಪಡೆದುಕೊಂಡು ಕಂಡವರ ಹೆಣ್ಣು ಮಕ್ಕಳ ದೇಹದ ಬಿಸಿಯಲ್ಲಿ ದುಡ್ಡು ಮಾಡಲು ಹೊರಟಿದ್ದವರಿಗೆ ಪರವಾನಿಗೆ ಕೊಡದ ಹಿನ್ನೆಲೆ ಅವರ ಹೆಸರನ್ನು ಕೆಡಿಸಲು ಮುಂದಾಗಿದ್ದಾರೆ ಎಂಬುದು ಇದೀಗ ರಹಸ್ಯವಾಗಿ ಉಳಿದಿಲ್ಲ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page