ಹುಬ್ಬಳ್ಳಿಯಲ್ಲಿ “ಬೀಯರ್” ಬಾಟಲಿಯಿಂದ ಹೊಡೆದು “ಯುವಕನ” ಭೀಕರ ಕೊಲೆ…!
ಹುಬ್ಬಳ್ಳಿ:ನಗರದ ಹೊರವಲಯದ ಶಿವಳ್ಳಿ ರಸ್ತೆಯಲ್ಲಿನ ಹೊಲದಲ್ಲಿ 25 ರಿಂದ 30 ವರ್ಷದ ಯುವಕನೊಬ್ಬನನ್ನು ಬಿಯರ್ ಬಾಟಲಿಯಿಂದ ಹೊಡೆದು ಭೀಕರವಾಗಿ ಕೊಲೆಯನ್ನು ಮಾಡಲಾಗಿದ್ದು ಇಂದು ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.
ಶಿವಳ್ಳಿ ರಸ್ತೆಯಲ್ಲಿನ ಹೊಲದಲ್ಲಿ ನಿನ್ನೇ ತಡ ರಾತ್ರಿ ಎಣ್ಣೆ ಪಾರ್ಟಿ ಮಾಡಲು ಬಂದಿದ್ದ ಯುವಕರ ನಡುವೆ ಗಲಾಟೆ ಸಂಭವಿಸಿ ಎಣ್ಣೆ ಪಾರ್ಟಿ ಮಾಡಲು ತಂದಿದ್ದ ಬಿಯರ್ ಬಾಟಲಿ ಒಡೆದು ಅದೇ ಬಾಟಲಿಯಿಂದ ಯುವಕನ ಕತ್ತಿಗೆ ಇರಿದು ಭೀಕರವಾಗಿ ಕೊಲೆಯನ್ನು ಮಾಡಿ ಕೊಲೆಗಡುಕರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಇಂದು ಮಧ್ಯಾಹ್ನ ಸಾರ್ವಜನಿಕರೊಬ್ಬರು ಹೊಲದಲ್ಲಿ ಬಿದ್ದಿದ್ದ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರದಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು,ಸದ್ಯ ಭೀಕರವಾಗಿ ಕೊಲೆಯಾದ ಯುವಕ ಯಾರು ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ.