ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ “ಎರಡು” ತಿಂಗಳಿಗೊಮ್ಮೆ “ಮರ್ಡರ್” ಆಗೋದು ಸಹಜ “ಕಮೀಷನರ್” ರಮನ್ ಗುಪ್ತಾ
ಹುಬ್ಬಳ್ಳಿ:ನೇಕಾರ ನಗರದಲ್ಲಿ ನಡೆದ ನಾಗರಾಜ ಚಲವಾದಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮೀಷನರ್ ರಮನ್ ಗುಪ್ತ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು. ಘಟನೆ ನನ್ನ ಗಮನಕ್ಕೆ ಬಂದಿದ್ದೆ ಹೀಗಾಗಿ ನಾನು ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ ಶವ ಪರಿಶೀಲನೆ ಮಾಡಿದ್ದೇನೆ.
ಹುಬ್ಬಳ್ಳಿ ನಗರ ದೊಡ್ಡದಾಗಿದ್ದು ಇಲ್ಲಿ ಎರಡು ತಿಂಗಳಿಗೊಮ್ಮೆ ಮರ್ಡರ್ ಆಗೋದು ಸಹಜ ಹೀಗಾಗಿ ಇದೇನು ಕಾನೂನು ವ್ಯವಸ್ಥೆಗೆ ದಕ್ಕೆ ದರುವಂತ ವಿಷಯವೇನಲ್ಲ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಈಗಲೇ ಹೇಳೋಕೆ ಏನು ಸಾಧ್ಯವಿಲ್ಲ ಪ್ರಕರಣ ತನಿಖೆ ಹಂತದಲ್ಲಿದೆ,ಆರೋಪಿಗಳನ್ನು ಬಂದನ ಮಾಡಿ ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುವುದು ಎಂದು ಹು-ಧಾ ಕಮೀಷನರ್ ರಮನ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.