“ಬೈರಿದೇವರಕೊಪ್ಪದ ದರ್ಗಾ” ತೆರವು ಕಾರ್ಯಾಚರಣೆ ಖಂಡನೀಯ ಹಿಂಡಸಗೇರಿ
ಹುಬ್ಬಳ್ಳಿ: ಬೈರಿದೇವರಕೊಪ್ಪ ದರ್ಗಾವನ್ನು ಸ್ಥಳಾಂತರ ಮಾಡುವ ಕುರಿತು ಸ್ಥಳೀಯ ಆಡಳಿತ ಮತ್ತು ಸಚಿವರಿಗೆ ಪ್ರಸ್ತಾವನೆಯನ್ನು ನೀಡಿದರು ಸಹಿತ ಅದಕ್ಕೆ ಸ್ಪಂದಸಿದೇ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎ.ಎಮ್.ಹಿಂಡಸಗೇರಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರು ವರ್ಷದ ಹಳೆಯ ದರ್ಗಾವನ್ನು ಬಿ.ಆರ್.ಟಿ.ಎಸ್ ಯೋಜನೆ ಮುರಿದರು ಸಹಿತ ದರ್ಗಾ ಮತ್ತು ಮಸೂತಿ ಒಡೆಯಲು ಆದೇಶ ಕೊಟ್ಟಿದ್ದು ಖಂಡನೀಯ. ಹು-ಧಾ ಶಾಂತಿ, ಸೌಹಾರ್ದತೆಯಿಂದ ಇದೆ. ಇದಕ್ಕೆ ಅಡ್ಡಿ ಉಂಟು ಮಾಡುವ ಕೆಲಸವನ್ನು ಕೆಲವು ಕಾಣದ ಕೈಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಧಾರ್ಮಿಕ ಬಿಕ್ಕಟ್ಟು ಕಾಯಿದೆ ಅನ್ವಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮೂಲಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳಿಗೆ ದರ್ಗಾ ತೆರವು ಕೈಬಿಡುವಂತೆ ಮನವಿ ಮಾಡಿದರು ಸಹಿತ ಪ್ರಯತ್ನ ವಿಫಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದರ್ಗಾ ಬಳಿ ಯಾವುದೇ ಸಂಚಾರಕ್ಕೆ ಅಡ್ಡಿಉಂಟಾಗಿಲ್ಲ. ಆದರೂ ದರ್ಗಾ ತೆರವು ಮುಂದಾಗಿರುವುದು ವಿಷಾಧನೀಯ ಎಂದರು.
ಮಹಾನಗರದಲ್ಲಿ ಯಾವತ್ತೂ ಈ ತರಹ ಘಟನೆ ಸಂಭವಿಸಿಲ್ಲ. ಆದರೆ ಈ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೇ ಈ ಹಿಂದೆ ಮಂಗಳೂರು ಹೆದ್ದಾರಿಯಲ್ಲಿನ ದರ್ಗಾವನ್ನು ಬೇರೆಡೆ ತಂತ್ರಜ್ಞಾನ ಬಳಸಿ ಸ್ಥಳಾಂತರ ಮಾಡಿದ್ದಾರೆ. ಆ ಮಾದರಿಯಲ್ಲಿ ಇಲ್ಲಿಯೂ ಮಾಡಬೇಕೆಂದು ತಿಳಿಸಿದ್ದೇವೆ ಎಂದು ಎ.ಎಮ್.ಹಿಂಡಸಗೇರಿ ಹೇಳಿದರು.