ಬೆಳಗಾವಿ : ವಿವಾಹಿತ ಮಹಿಳೆಯನ್ನು ಮದುವೆಯಾಗಿ ನಂಬಿಸಿ ಗಂಡನಿಂದ ಡೈವೋರ್ಸ್ ಕೊಡಿಸಿ ಮಹಿಳೆಗೆ ಕೈ ಕೊಟ್ಟ ಯುವಕನ ಮನೆಯ ಮುಂದೆ ಮಹಿಳೆಯೊಬ್ಬಳು ಧರಣಿ ಕುಳಿತ ಘಟನೆ ನಡೆದಿದೆ.
ಮೌನೇಶ ಎನ್ನುವ ಯುವಕ ವಿವಾಹಿತ ಮಹಿಳೆಗೆ ಮೊಬೈಲ್ ಮೂಲಕ ಪರಿಚಯವಾಗಿದ್ದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರ ಆದ ಹಿನ್ನೆಲೆಯಲ್ಲಿ ನೀನು ಗಂಡನಿಗೆ ವಿಚ್ಛೇದನ ನೀಡು ನಿನ್ನನ್ನು ಮದುವೆ ಆಗುತ್ತೇನೆ ಎಂದು ಮೌನೇಶ ಗೀತಾಳಿಗೆ ಹೇಳಿದ್ದ.
ಮೌನೇಶನ ಮಾತು ಕೇಳಿ ಇದೀಗ ಗೀತಾ ಗಂಡನಿಗೆ ವಿಚ್ಛೇದನ ನೀಡಿದ್ದು,ಇದೀಗ ಮೌನೇಶನ ಜೊತೆ ಜೀವನ ಸಾಗಿಸಲು ಆತನ ಊರಾದ ಅರಬಾವಿ ಗೇ ಬಂದಿದ್ದಾಳೆ,ಆದ್ರೆ ಮೌನೇಶ ಇದೀಗ ಗೀತಾಳಿಗೆ ಕೈ ಕೊಟ್ಟು ಮನೆ ಬಾಗಿಲು ಹಾಕಿ ಎಸ್ಕೇಪ್ ಆಗಿದ್ದು.
ಈತನ ನಂಬಿ ಬಂದ ಗೀತಾ ಇದೀಗ ಗಂಡನ ಮನೆಯು ಇಲ್ಲ ತವರು ಮನೆಯು ಇಲ್ಲ,ಇತ್ತ ಲವ್ವರ್ ಮನೆಯು ಇಲ್ಲದಂತಾಗಿದ್ದು,ನನಗೇ ನ್ಯಾಯ ಸಿಗುವ ವರೆಗೂ ಕೂಡಾ ನಾನು ಮೌನೇಶನ ಮನೆ ಬಿಟ್ಟು ಹೋಗಲ್ಲ ಎಂದು ಗೀತಾ ಪಟ್ಟು ಹಿಡಿದು ಪ್ರಿಯಕರನ ಮನೆ ಮುಂದೆ ಕೂತಿದ್ದಾಳೆ.