ದಕ್ಷ ಅಧಿಕಾರಿ “ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ” ಹೆಸರು ಕೆಡಿಸಲು ಹುನ್ನಾರ ಮಾಡಿದ “ಮಹಾನುಭಾವರು”..!
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ಬಾಲ್ಯ ವಿವಾಹಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಹೆಸರನ್ನು ಕೆಡಿಸಲು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಳಕು ಮನಸ್ಥಿತಿಯ ಸಿಬ್ಬಂದಿಗಳು ಮುಂದಾಗಿದ್ದಾರೆ.
ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲ್ಯ ವಿವಾಹಕ್ಕೆ ಸಂಬಂದಿಸಿದಂತೆ ಪ್ರಕರಣವನ್ನು ದಾಖಲು ಮಾಡಿಕೊಂಡ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೊಂದ ಬಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು,ಇದನ್ನು ನ್ಯಾಯಾಧೀಶರ ಗಮನಕ್ಕೆ ಕೂಡಾ ತಂದು ಪ್ರಾಮಾಣಿಕವಾಗಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಬಾಲಕ ಹಾಗೂ ಬಾಲಕಿಯ ಪೋಷಕರನ್ನು ಖುದ್ದು ಸ್ಥಳಕ್ಕೆ ಕರೆದೊಯ್ದು ಪಂಚನಾಮೆ ಕೂಡಾ ಮಾಡಿದಾಗ,ನೊಂದ ಬಾಲಕಿ ನನ್ನ ಮೇಲೆ ಅತ್ಯಾಚಾರ ಆಗಿಲ್ಲ ಹೀಗಾಗಿ ನನ್ನನ್ನು ವೈಧ್ಯಕೀಯ ಪರೀಕ್ಷೆ ಬೇಡ ಎಂದು ಮಹಿಳಾ ಅಧಿಕಾರಿಯ ಮುಂದೆ ಹೇಳಿದ್ದಾಳೆ ಅಷ್ಟೇ ಅಲ್ಲದೆ ನೊಂದ ಬಾಲಕಿಯ ತಾಯಿಯು ಕೂಡಾ ಮಗಳಿಗೆ ವೈದ್ಯಕೀಯ ಪರೀಕ್ಷೆ ಬೇಡ ಅಂತಾ ಹೇಳಿದ್ದಾರೆ.
ಹೀಗಾಗಿ ಇದನ್ನೆಲ್ಲ ಗಮನಿಸಿದ ನ್ಯಾಯಾಧೀಶರು ಕೂಡಾ ನೊಂದ ಬಾಲಕ ಮಾಡಿದ ಅಪರಾಧ ಕೃತ್ಯ 7 ವರ್ಷಗಳ ಒಳಗಿನ ಶಿಕ್ಷೆ ಆಗಿರುವ ಕಾರಣ ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ,ಆದ್ರೆ ಇದೆ ವಿಷಯ ಮುಂದಿಟ್ಟುಕೊಂಡ ಕೆಲವೊಂದಿಷ್ಟು ಕೊಳಕು ಮನಸ್ಥಿತಿಯ ಅದೇ ಠಾಣೆಯ ಸಿಬ್ಬಂದಿ ಇಲ್ಲ ಸಲ್ಲದ ಕಥೆಯನ್ನು ಹೆಣೆದು,ಇನ್ಸ್ಪೆಕ್ಟರ್ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ.
ಆದ್ರೆ ಇದ್ಯಾವದಕ್ಕೂ ತಲೆ ಕೆಡಿಸಿಕೊಳ್ಳದ ದಕ್ಷ ಅಧಿಕಾರಿ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿರಲ್ಲಿ,ಬೊಗ ….ಳೂ…. ನಾ….ಬೊಗಳುತ್ತಿರಲ್ಲಿ.