ಹುಬ್ಬಳ್ಳಿ

ಹುಬ್ಬಳ್ಳಿಯ “ಎಪಿಎಂಸಿ” ಯಲ್ಲಿ “ಕಾಂತಾರ” ಶೈಲಿಯ ಗಣೇಶ

Spread the love

ಹುಬ್ಬಳ್ಳಿ: ಈ ಬಾರಿ ಗಣೇಶ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಂತೆ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಿ ಜನರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಬೈರಿದೇವರಕೊಪ್ಪದ ಎಪಿಎಂಸಿಯ ಬಸವ ಕಾಲೋನಿಯಲ್ಲಿ ಕಾಂತಾರ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಗಣೇಶ ಹಬ್ಬ ಬಂತು ಅಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ಏರಿಯಾಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಯಕನ ನೆನೆಯೋದೇ ಖುಷಿ. ಅದರಂತೆ ಬಸವ ಕಾಲೋನಿಯ ಶ್ರೀ ಗಜಾನನ ಉತ್ಸವ ಸಮಿತಿಯ ಸದಸ್ಯರು 26 ನೇ ವರ್ಷದ ಅಂಗವಾಗಿ ಕಾಂತಾರ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದೆ.

ಈಗಾಗಲೇ ಕಳೆದ 25 ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಆಚರಿಸಿದ ಶ್ರೀ ಗಜಾನನ ಉತ್ಸವ ಸಮಿತಿಯ ಸದಸ್ಯರು ಈ ಬಾರಿ ಏಳು ಅಡಿಯ ಕಾಂತಾರ ಗಣೇಶನನ್ನು ದೂರದ ಬೆಳಗಾವಿಯಿಂದ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಹನ್ನೊಂದು ದಿನಗಳವರೆಗೂ ಇಲ್ಲಿ ಕಾಂತಾರ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page