ಅಪರಾಧನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ
“ಪತ್ನಿಯಿಂದ” ಜೀವ ಬೆದರಿಕೆ ಇದೇ ಎಂದು “ಪೊಲೀಸ್ ಠಾಣೆ” ಮೆಟ್ಟಿಲೇರಿದ ಹುಬ್ಬಳ್ಳಿಯ ಖ್ಯಾತ ವೈಧ್ಯ.
ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರತಿಷ್ಠಿತ ವೈದ್ಯರಿಗೆ ಅವರ ಪತ್ನಿಯೇ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ ಕ್ರಾಂತಿಕಿರಣ ಅವರಿಗೆ ಅವರ ಪತ್ನಿಯೇ ಜೀವ ಬೆದರಿಕೆ ಹಾಕಿದ್ದಾರೆ,ಎಂದು ಆರೋಪ ಮಾಡಿ ಇದೀಗ ವಿದ್ಯಾನಗರ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಕಳೆದ ಹಲವು ದಿನಗಳಿಂದ ವೈಧ್ಯ ದಂಪತಿಗಳ ನಡುವೆ ಕಲಹ ಮೂಡಿ ಬೇರೆ ಬೇರೆ ಯಾಗಿ ಪರಸ್ಪರ ದೂರು ದಾಖಲು ಕೂಡಾ ಮಾಡಿಕೊಂಡು ಪ್ರಕರಣ ಕೂಡಾ ಈಗಾಗಲೇ ಕೋರ್ಟ್ ನಲ್ಲಿದೆ.
ಇದರ ನಡುವೆ ನಿನ್ನೇ ತಡ ರಾತ್ರಿ ಡಾ ಕ್ರಾಂತಿಕಿರಣ ವಿದ್ಯಾನಗರ ಠಾಣೆಗೆ ಬಂದು ಪತ್ನಿಯ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲು ಮಾಡಿದ್ದಾರೆ.