ನಮ್ಮೂರುಬ್ರೇಕಿಂಗ್ ನ್ಯೂಸ್
ಹುಬ್ಬಳ್ಳಿಯ “ಚೆನ್ನಮ್ಮ ಸರ್ಕಲ್” ಬಳಿ “ಸಾವಿರಾರು” ಜನ ಬೇಕೇ ಬೇಕು “ನ್ಯಾಯ” ಬೇಕೆಂದು.
ಹುಬ್ಬಳ್ಳಿ:ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕ್ರೈಸ್ತ ರ ಸಮುದಾಯದವರ ಮೇಲೆ ಹಲ್ಲೆ ಹಾಗೂ ಮತಾಂತರ ನಿಷೇಧ ಕಾಯ್ದೆ ಜಾರಿ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಹಾಗೂ ವಿವಿಧ ಚರ್ಚ್ ಗಳ ಧರ್ಮಗುರುಗಳು ಮತ್ತು ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಗದಗ ರಸ್ತೆಯ ಸೈಂಟ್ ಪೀಟರ್ ಚರ್ಚ್ ನಿಂದ ಪ್ರತಿಭಟನೆ ಮಾಡಿದರು.
ಕೂಡಲೇಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯಬೇಕು ಹಾಗೂ ಕ್ರೈಸ್ತ ಸಮುದಾಯದ ಮೇಲೆ ಇತ್ತೀಚಿನ ಸುಳ್ಳು ಆರೋಪಗಳನ್ನು ಹಾಕಿ ಹಲ್ಲೆ, ದೌರ್ಜನ್ಯ ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಹಸೀಲ್ದಾರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.