ರಸ್ತೆ ದಾಟುತ್ತಿದ್ದವನ ಮೇಲೆ “ಹರಿದ” ನೂರಾರು ವಾಹನ ದೇಹ ಸಂಪೂರ್ಣ “ಛಿದ್ರ ಛಿದ್ರ”
ಹುಬ್ಬಳ್ಳಿ:ರಸ್ತೆ ದಾಟುತ್ತಿದ್ದ ಪಾದಾಚಾರಿಯ ಮೇಲೆ ನೂರಾರು ವಾಹನಗಳು ಹರಿದ ಪರಿಣಾಮ ವ್ಯಕ್ತಿಯೊಬ್ಬನ ದೇಹ ಸಂಪೂರ್ಣವಾಗಿ ಹರಿದು ಛಿದ್ರ ಛಿದ್ರವಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಶಿರಗುಪ್ಪಿಯ ನೆಹರು ಪ್ರೌಢ ಶಾಲೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 40-45 ವರ್ಷದ ಪಾದಾಚಾರಿಯ ಮೇಲೆ ಗುರುವಾರ ತಡ ರಾತ್ರಿ ಅಪರಿಚಿತ ವಾಹನ ಹರಿದ ಪರಿಣಾಮ ವ್ಯಕ್ತಿ ನಡು ರಸ್ತೆಯಲ್ಲಿಯೇ ಮೃತಪಟ್ಟಿದ್ದಾನೆ.
ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದ ಪರಿಣಾಮ ಈ ರಸ್ತೆಯಲ್ಲಿ ಓಡಾಡುವ ಬೇರೆ ಬೇರೆ ವಾಹನಗಳು ಕೂಡಾ ಪಾದಾಚಾರಿಯ ಶವದ ಮೇಲೆ ಹರಿದ ಪರಿಣಾಮ ದೇಹವೆಲ್ಲ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿ ಹೋಗಿದೆ,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡು ಛಿದ್ರ ಛಿದ್ರವಾದ ದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿ ಮೃತಪಟ್ಟ ವ್ಯಕ್ತಿ ಯಾರು ಅಪಘಾತ ಮಾಡಿದ ವಾಹನ ಯಾವದು ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.