“ಬೈರಿದೇವರಕೊಪ್ಪದ ದರ್ಗಾ” ತೆರವಿನ ಹಿಂದೆ “ಬಿಜೆಪಿಯ” ಕೈವಾಡವಿದೆ..!
ಹುಬ್ಬಳ್ಳಿ: ಬಿಜೆಪಿಯವರು ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಹಿಡನ್ ಅಜೆಂಡಾದಿಂದಾಗಿ ಹಿಂದೂ-ಮುಸ್ಲಿಂ ಸಮುದಾಯವನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವೇ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಎಂದು ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರು ಹೇಳಿದ್ದಾರೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದ ಮಧ್ಯೆದ ಹಜರತ್ ಸೈಯದ್ ಮೊಹರಮ್ ಶಾ ದರ್ಗಾ (ಬೈರಿದೇವರಕೊಪ್ಪ ದರ್ಗಾ) ವನ್ನು ಬಿ.ಆರ್.ಟಿ.ಎಸ್ ಯೋಜನೆ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿ.ಆರ್.ಟಿ.ಎಸ್ ಕಾರಿಡಾರ್ ಎಲ್ಲೆಡೆ 36 ಮೀಟರ್ ಇದೆ. ಆದರೆ ದರ್ಗಾ ಬಳಿ ಅಧಿಕಾರಿಗಳು ಬರೋಬರಿ 44 ಮೀಟರ್ ಗುರುತು ಮಾಡಿದ್ದಾರೆ. ಇದು ಶಾಸಕ ಅರವಿಂದ ಬೆಲ್ಲದ್ ಅವರ ಶೋರೂಂ ಉಳಿಸಲು ಮಾಡಿದ ಹುನ್ನಾರ ಆಗಿದೆ ಎಂದು ಆರೋಪಿಸಿದರು.
ಇನ್ನು ಹೈ ಕೋರ್ಟ್ ನಲ್ಲಿ ದರ್ಗಾ ತೆರವು ವಿಚಾರವಾಗಿ ಸರಿಸುಮಾರು ಎರಡು ತಿಂಗಳು ಆದೇಶವನ್ನು ತಡೆದು ಏಕಾಏಕಿ ಕೊನೆಯ ದಿನಗಳಲ್ಲಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಇಂದು ಬೆಳಗಿನ ಜಾವ 3 ಗಂಟೆವರೆಗೆ ಜಿಲ್ಲಾಧಿಕಾರಿ, ಪೋಲಿಸ್ ಆಯುಕ್ತರು ಮತ್ತು ಬಿ.ಆರ್.ಟಿ.ಎಸ್ ಅಧಿಕಾರಿಗಳಿಗೆ ಮನವಿ ಮಾಡಿ ದರ್ಗಾವನ್ನು ಉಳಿಸಲು ತಿಳಿಸಿದ್ದೇವು ಆದರೆ ಅವರಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಗಾ ಉಳಿಸುವ ಬಗ್ಗೆ ಮುಸ್ಲಿಂ ಮುಖಂಡರು ಸಿಎಂ ಅವರನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ್ದೇವು. ಆದರೆ ಆಗಲಿಲ್ಲ. ಹೀಗಾಗಿ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಸೇರಿದಂತೆ ಪ್ರಮುಖರಿಗೆ ಫೋನ್ ಮೂಲಕ ತಿಳಿಸುವ ಕೆಲಸ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದನ್ನು ನೋಡಿದರೇ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅಧಿಕಾರ ದುರುಪಯೋಗ ಮಾಡಿ ಬಿಜೆಪಿಯವರು ಮೇಲಿಂದ ಮೇಲಿಂದಮೇಲೆ ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಹಿಡನ್ ಅಜೆಂಡಾ ಇದೆ ಎಂದು ಕಿಡಿಕಾರಿದರು.
ಇನ್ನು ಈ ಬಗ್ಗೆ ಕೋರ್ಟ್ ನಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕೆಂದರೆ ಕೋರ್ಟ್ ರಜೆ ಇದೆ. ಅಲ್ಲದೇ ಇದೀಗ ಬರುತ್ತರುವ ಆದೇಶವನ್ನು ಗಮನಿಸಿದರೇ ಕಾನೂನು ಯಾವ ರೀತಿಯಲ್ಲಿದೆ ಎಂಬುದು ಅರಿವಾಗಿದೆ. ಹೀಗಾಗಿ ದರ್ಗಾ ಉಳಿಸಲು ಬೇಕಾದ ಎಲ್ಲ ಪ್ರಯತ್ನ ಮಾಡುತ್ತೇವೆಂದು ಅಲ್ತಾಫ್ ಹಳ್ಳೂರು ಹೇಳಿದ್ದಾರೆ.