ಹುಬ್ಬಳ್ಳಿ:ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೆಸರು ಕೆಡಿಸಲು ಮುಂದಾಗಿದ್ದ ನೀಚ ಮನಸ್ಥಿತಿಯ ಕೆಲವೊಂದಿಷ್ಟು ಜನರಿಗೆ ರಜತ್ ತಮ್ಮ ಕೆಲಸದ ಮೂಲಕವೇ ಉತ್ತರ ಕೊಡುವುದರ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಜೊತೆಗೆ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದ ರಜತ್ ಏಳಿಗೆಯನ್ನು ಸಹಿಸದ ಕೆಲವು ಜನ.ರಜತ್ ಹೆಸರು ಕೆಡಿಸಲು ಮುಂದಾಗಿದ್ದರು.
ಯಾರ ಹೆಸರನ್ನು ಮುಂದಿಟ್ಟುಕೊಂಡು ರಜತ್’ಗೆ ಕಳಂಕ ತರಲು ಮುಂದಾಗಿದ್ದರೋ ಅವರೇ ಇಂದು ತಮ್ಮ ನಾಯಕನ ಬಗ್ಗೆ ಬಿಜೆಪಿಯ ಸಚಿವ ಮಹಾಶಯನ ಮಾತಿಗೆ ಎಲ್ಲಿಯೂ ಕೂಡಾ ಧ್ವನಿ ಎತ್ತುವ ಕೆಲಸಕ್ಕೆ ಮುಂದಾಗಿಲ್ಲ.ಈ ನಡುವೆ ಅವರು ಮಾಡಬೇಕಾದ ಕೆಲಸವನ್ನು ಇಂದು ರಜತ್ ಮಾಡಿದ್ದು ಹೆಸರು ಕೆಡಿಸಲು ಮುಂದಾದ ಕೇಡಿಗಳಿಗೆ ತಮ್ಮ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ಮಂಡ್ಯದಲ್ಲಿ ಅವಹೇಳನಕಾರಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ನ ಪ್ರತಿಕ್ರತಿಯನ್ನು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ರಜತ್ ನೇತೃತ್ವದಲ್ಲಿ ಅಲ್ತಾಫ್ ಹಳ್ಳೂರ, ಹುವಪ್ಪ ದಾಯಗೋಡಿ, ಸುವರ್ಣ,ಆರೀಫ್, ಯೂಸುಫ್,ಶಹಜಮಾನ್, ಸೇರಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.