ನಮ್ಮೂರುಹುಬ್ಬಳ್ಳಿ- ಧಾರವಾಡ

“ಧಾರವಾಡದಲ್ಲಿ” ಭೀಕರ ಅಪಘಾತ “ಮದುಮಗನ ತಾಯಿ” ಸೇರಿ 7ಜನ ಸ್ಥಳದಲ್ಲೇ ಸಾವು

Spread the love

ಧಾರವಾಡ: ಧಾರವಾಡ ತಾಲ್ಲೂಕಿನ ನಿಗದಿ ಗ್ರಾಮದ ಬಳಿಯಲ್ಲಿ ಕ್ರೂಜರ್ ವಾಹನ ಪಲ್ಟಿಯಾದ ಪರಿಣಾಮ 7 ಜನ ಸ್ಥಳದಲ್ಲೇ ಮೃತಪಟ್ಟು 13 ಜನ ಗಂಭೀರವಾಗಿ ಗಾಯವಾದ ಘಟನೆ ನಿಗದಿ ಬಳಿಯಲ್ಲಿ ನಡೆದಿದೆ.

ದಾಸನಕೊಪ್ಪ ಕುಟುಂಬದವರ ನಿಶ್ಚಿತಾರ್ಥ ಕಾರ್ಯವನ್ನು ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ಮುಗಿಸಿ ಮರಳಿ ನಿಗದಿ ಗ್ರಾಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕ್ರೂಜರ್ ವಾಹನ ಚಾಲಕ ಅತಿ ಜೋರಾಗಿ ಚಾಲನೆ ಮಾಡುತ್ತಿದ್ದಾಗ ಕ್ರೂಜರ್ ಪಲ್ಟಿಯಾದ ಪರಿಣಾಮ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ 13 ಜನರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು,ನಾಲ್ಕು ಶವಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಕಳಿಸಿ ಮೂರು ಶವಗಳನ್ನು ಹುಬ್ಬಳ್ಳಿಯ ಕೀಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ.

ಮೃತಪಟ್ಟವರನ್ನು ಅನನ್ಯ,ಹರೀಶ,ಶಿಲ್ಪಾ,ಮಹೇಶ್ವರ,ಮಧುಶ್ರೀ,ಶಂಭುಲಿಂಗಯ್ಯ,ನೀಲವ್ವ ಎಂದು ತಿಳಿದು ಬಂದಿದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page