ಹುಬ್ಬಳ್ಳಿ- ಧಾರವಾಡ
“ಹಾವಿಗೆ ಆಪರೇಷನ್” ಮಾಡಿ ಜೀವ ಉಳಿಸಿದ ಧಾರವಾಡದ “ಡಾಕ್ಟ್ರು”..!
ಧಾರವಾಡ: ತಲೆಯ ಮೇಲೆ ಗಂಟಿನಾಕಾರದ ಗಾಯದಿಂದ ಬಳಲುತ್ತಿದ್ದ ಆಭರಣದ ಹಾವಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಹಾವಿಗೆ ಮರು ಜನ್ಮ ನೀಡಿದ್ದಾರೆ.
ಧಾರವಾಡದ ಅಣ್ಣಿಗೇರಿ ಕಾಲೇಜು ಬಳಿ ಈ ಆಭರಣದ ಹಾವು ಕಾಣಿಸಿಕೊಂಡಿತ್ತು. ಉರಗ ತಜ್ಞ ಸೋಮಶೇಖರ ಚೆನ್ನಶೆಟ್ಟಿ ಅವರು, ಈ ಹಾವನ್ನು ರಕ್ಷಣೆ ಮಾಡಿದ್ದರು. ಆದರೆ, ಈ ಹಾವಿನ ತಲೆಯ ಮೇಲೆ ಗಂಟಿನಾಕಾರದ ಗಾಯವಾಗಿದ್ದನ್ನು ಕಂಡ ಸೋಮಶೇಖರ ಅವರು.
ಆ ಹಾವನ್ನು ಕೃಷಿ ವಿಶ್ವವಿದ್ಯಾಲಯದ ವೈದ್ಯರ ಬಳಿ ತೆಗೆದುಕೊಂಡು ಹೋಗಿ ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ವೈದ್ಯರು ಆ ಹಾವಿನ ತಲೆಯ ಮೇಲಿದ್ದ ಗಂಟನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಹಾವು, ಪ್ರಾಣಾಪಾಯದಿಂದ ಪಾರಾಗಿದೆ.