ಅಪರಾಧನಮ್ಮೂರುಹುಬ್ಬಳ್ಳಿ- ಧಾರವಾಡ
ಧಾರವಾಡ ಬಳಿ “ಭೀಕರ” ಅಪಘಾತ “ಸಾವಿನ” ಸಂಖ್ಯೆ 8ಕ್ಕೇ ಏರಿಕೆ
ಹುಬ್ಬಳ್ಳಿ: ನಿಗದಿ ಗ್ರಾಮದ ಬಳಿಯಲ್ಲಿ ಕ್ರೂಸರ್ ವಾಹನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೇ ಏರಿಕೆಯಾಗಿದೆ.
ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದರು,ಉಳಿದ 13 ಜನರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು ಆದ್ರೆ ಚೆನ್ನವ್ವ ಎಂಬ ಮಹಿಳೆ ಇದೀಗ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಹಿನ್ನೆಲೆ ಸಾವಿನ ಸಂಖ್ಯೆ ಎಂಟಕ್ಕೇ ಏರಿಕೆಯಾಗಿದೆ.
ಸಧ್ಯ ಇನ್ನು ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ.