ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಕ್ರಿಕೆಟ್ ಬುಕ್ಕಿ”ಗಳ ಹಣೆಗೆ “ಗೋವಿಂದ”…ನ…ನಾಮ…!

Spread the love

ಹುಬ್ಬಳ್ಳಿ: ನಗರದಲ್ಲಿ ಒಂದೆಡೆ ಕ್ರಿಕೆಟ್ ಬೆಟ್ಟಿಂಗ್ ದಂದೇ ಹತ್ತಿಕ್ಕಲು ಹಿರಿಯ ಪೊಲೀಸ್ ಅಧಿಕಾರಿಗಳು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ ಅದೇ ರೀತಿ ಕೆಲವು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಕೂಡಾ ಬೆಟ್ಟಿಂಗ್ ಕುಳಗಳ ಮೇಲೆ ದಾಳಿಯನ್ನು ಮಾಡಿ ಪ್ರಕರಣವನ್ನು ದಾಖಲು ಮಾಡುತ್ತಿದ್ದಾರೆ.

ಆದ್ರೆ ಇದೆಲ್ಲದರ ನಡುವೆ ನಗರದ ಹಿರಿಯ ಅಧಿಕಾರಿಯೊಬ್ಬರ ಕೆಳಗೆ ಕನ್ವಿಎನ್ಸ್ ಮಾಡುವ ಆಸಾಮಿಯೊಬ್ಬ ಕ್ರಿಕೆಟ್ ಬುಕ್ಕಿಗಳನ್ನು ಕರೆಯಿಸಿ ಹಣೆಗೆ ಗೋವಿಂದ್’ನ ತಿಲಕವನ್ನು ಇಟ್ಟು ಛೇಂಬಿನ ಮೂಲಕ ಹಂಡೆ ತುಂಬಿಸುವ ಪೂಜಾ ಕಾರ್ಯಕ್ರಮ ಗಂಟೆಯಿಲ್ಲದೆ ಶುರುಮಾಡಿದ್ದಾನೆ .

ಸುಮಾರು ಎಂಟರಿಂದ ಹತ್ತಕ್ಕೂ ಹೆಚ್ಚು ಬುಕ್ಕಿಗಳನ್ನು ಹಿರಿಯ ಅಧಿಕಾರಿಯ ಬಳಿ ಕರೆಯಿಸಿ ವಾರ್ನಿಂಗ್ ಕೊಟ್ಟಂತೆ ಮಾಡಿ ತನ್ನ ಗೋವಿಂದ್ ತಿಲಕವನ್ನು ಬುಕ್ಕಿಯ ಹಣೆಯ ಮೇಲೆ ಇಟ್ಟು 50 k ದಿಂದ 70 k ವರೆಗೆ ದಕ್ಷಿಣೆ ಕೊಡಬೇಕು ಎಂಬ ಭಕ್ತಿ ಭಾವದ ಮಾತನ್ನು ಹೇಳುತ್ತಿದ್ದಾನಂತೆ.

ಹೀಗಾಗಿ ಕೆಲವು ದಕ್ಷಿಣೆ ಕೊಟ್ಟ ಬುಕ್ಕಿಗಳು ಗೋವಿಂದ ಹಣೆಗೆ ಹಚ್ಚಿದ ನಾಮವನ್ನು ಹಾಕಿಕೊಂಡು ನಗರದಲ್ಲಿ ತಿರುಗುತ್ತಿದ್ದಾಗ,ಗೋವಿಂದನ ದರ್ಶನಕ್ಕೆ ಯಾವಾಗ ಹೋಗಿದ್ರಿ ಹೇಗಿತ್ತು ದರ್ಶನ ಅಂತಾ ಕೇಳಿದಾಗ,ಮೆಟ್ಟಿಲನ್ನು ಹತ್ತಲು ಸ್ವಲ್ಪ ಕಷ್ಟವಾಯಿತು ಆದ್ರೆ ದಕ್ಷಿಣೆ ಕೊಟ್ಟ ಮೇಲೆ ಸ್ವಲ್ಪ ಸಮಾಧಾನ ವಾಯಿತು ಅಂತಾ ಗೋವಿಂದನ ಮಹಿಮೆ ಸಾರಿ ಸಾರಿ ಹೇಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page