ಹುಬ್ಬಳ್ಳಿ
ನಗರದಲ್ಲಿ “ನಿಖಿಲ್ ಆತ್ಮಹತ್ಯೆ” ಕೇಸ್ ಪೊಲೀಸರು ‘ಕಿರುಕುಳ ಕೊಟ್ಟಿಲ್ಲ’ ಎಂಬ ಮಾಹಿತಿ ನನಗೆ ಇದೆ “ಮಿನಿಸ್ಟರ್” ಸಂತೋಷ್ ಲಾಡ್..!
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ನಿಖಿಲ್ ಎಂಬ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಿರುಕುಳ ಎಂಬ ಆರೋಪಕ್ಕೆ ಸಚಿವ ಸಂತೋಷ್ ಲಾಡ್ ತಮ್ಮದೇ ಶೈಲಿಯಲ್ಲಿಯೇ ಉತ್ತರವನ್ನು ನೀಡಿದ್ದಾರೆ.
ನನಗೆ ನನ್ನ ಪರಿಚಯದವರೇ ಈ ವಿಚಾರವನ್ನು ಗಮನಕ್ಕೆ ತಂದಿದ್ದು ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಸಾತೇನಹಳ್ಳಿ ಎರಡು ಕುಟುಂಬದವರಿಗೆ ಸಂದಾನ ಮಾಡಿದ್ದಾರೆ ಹೊರತು ಕಿರುಕುಳ ಕೊಟ್ಟಿಲ್ಲ ಎಂಬ ಮಾಹಿತಿ ನನಗೆ ಲಭ್ಯವಿದೆ.
ಆದ್ರೂ ಕೂಡಾ ಪೊಲೀಸರ ಮೇಲೆ FIR ಆಗೋದು ತುಂಬಾ ಕಡಿಮೆ ನಾವು ಪೊಲೀಸ್ ಅಧಿಕಾರಿಯ ಮೇಲೆ FIR ಮಾಡಿ ತನಿಖೆಯನ್ನು ಪಾರದರ್ಶಕವಾಗಿ ಮಾಡಲಾಗುತ್ತಿದ್ದೇವೆ ಎಂದು ಸಂತೋಷ್ ಲಾಡ್ ಮಾಧ್ಯಮದ ಮುಂದೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.