ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಈ ನಡುವೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಈ ಬಾರಿಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಪಲು ಕೆಲವು ಬಿಜೆಪಿ ಮುಖಂಡರೆ ಕಾರಣ ಎಂದು ಹೇಳಲಾಗುತ್ತಿದ್ದು ಅದಕ್ಕೆ ಪರೋಕ್ಷವಾಗಿ ಅವರಿಗೆ ಟಿಕೆಟ್ ನೀಡದೆ ಇರೋದು ಸ್ವಾಗತಾರ್ಹ ಎಂಬ ಲೆಟರ್ ಇದೀಗ ವೈರಲ್ ಆಗುತ್ತಿದೆ.
ಶ್ರೀ ಗಜಾನನ ಮಹಾ ಮಂಡಳಿ ಹೆಸರಿನಲ್ಲಿರುವ ಆ ಲೆಟರ್ ನಲ್ಲಿ ಜಗದೀಶ ಶೆಟ್ಟರ್ 5 ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ರಾಜ್ಯದ ಮಂತ್ರಿ ಹಾಗೂ ಇತರೆ ಸ್ಥಾನಮಾನ ಅನುಭವಿಸಿ 400/500 ಕೋಟಿ ರೂಪಾಯಿ ಮಾಡಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಿದ್ದು ಸ್ವಾಗತಾರ್ಹ.
ಅಷ್ಟೇ ಅಲ್ಲದೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಷಿ ಅಥವಾ ಮಹೇಶ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಿದರೆ ಒಳ್ಳೆಯದು ಹಾಗೆಯೇ ಜಗದೀಶ ಶೆಟ್ಟರ ಅವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡಬೇಕು ಎಂಬ ಅಂಶಗಳು ಲೆಟರ್ ನಲ್ಲಿದೆ.