ಶಿಕ್ಷಣಹುಬ್ಬಳ್ಳಿ

ಶಿಕ್ಷಕರ “ಕಾಲಿಗೆ” ಬಿದ್ದ ಶಿವಳ್ಳಿ ಪುತ್ರಿ “ಮಧುಶ್ರೀ” ಯಾಕೆ ಗೊತ್ತಾ..!

Spread the love

ಹುಬ್ಬಳ್ಳಿ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹುಬ್ಬಳ್ಳಿಯ ಆದರ್ಶ ನಗರದ ಡಾ.ಜಿ.ವಿ.ಜೋಶಿ ರೋಟರಿ ಸ್ಕೂಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಮಧು ಶ್ರೀ ಶಿವಳ್ಳಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಗೈದಿದ್ದಾಳೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಮೈದುನನ ಮಗಳೇ ಈ ಸಾಧನೆ ಮಾಡಿದ್ದಾಳೆ. ಮಾರ್ಚ್ 28 ರಿಂದ ಏಪ್ರೀಲ್ 11 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿತ್ತು‌. ಈ ಪರೀಕ್ಷೆಯಲ್ಲಿ ಮಧುಶ್ರೀ ಶಿವಳ್ಳಿ ಇಂಗ್ಲಿಷ್ ನಲ್ಲಿ 125 ಕ್ಕೆ 123, ಕನ್ನಡದಲ್ಲಿ 100 ಕ್ಕೆ 100, ಹಿಂದಿಯಲ್ಲಿ 100 ಕ್ಕೆ 100, ಗಣಿತದಲ್ಲಿ 100 ಕ್ಕೆ 100, ವಿಜ್ಞಾನದಲ್ಲಿ 100 ಕ್ಕೆ 100, ಸಮಾಜಶಾಸ್ತ್ರದಲ್ಲಿ 100 ಕ್ಕೆ 100 ಅಂಕ ಪಡೆದುಕೊಂಡು ಒಟ್ಟು 625 ಕ್ಕೆ 623 ಅಂಕ ಪಡೆಯುವ ಮೂಲಕ ಧಾರವಾಡ ಜಿಲ್ಲೆಗೆ ಸೇರಿದಂತೆ ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿದ್ದಾಳೆ.

ಇನ್ನು ವಿದ್ಯಾರ್ಥಿಯ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಮೆಚ್ಚಿಕೊಂಡಿದ್ದು, ಶಾಲೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ವಿದ್ಯಾರ್ಥಿ ಮಧುಶ್ರೀ ತನಗೆ ಶಿಕ್ಷಣ ಹೇಳಿಕೊಟ್ಟ ಗುರುಗಳಿಗೆ ಕಾಲು ಮುಗಿದು ನಮಸ್ಕರಿಸಿ ಧನ್ಯತಾಭಾವ ಮೆರೆದಳು. ಇದೇ ವೇಳೆ ಶಾಲೆಯ ಹೆಡ್ ಮಾಸ್ಟರ್ ನರೇಶ ಪಾಟೀಲ್ ಮಧುಶ್ರೀ ಗೆ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ನಂತರ ಮಾತನಾಡಿದ ಮಧುಶ್ರೀ ಶಿವಳ್ಳಿ, ಕುಟುಂಬ ಮತ್ತು ಶಾಲೆಯ ಸಂತೋಷವೇ ಮುಖ್ಯವಾಗಿದೆ. ಯಾರಿಂದಲೂ ಒತ್ತಡ ಇರಲಿಲ್ಲ. ನಿರಂತರವಾಗಿ ನಿತ್ಯ 6 ಗಂಟೆ ಶ್ರದ್ಧೆಯಿಂದ ಓದಿದ್ದು ಫಲ ನೀಡಿದೆ ಎಂದು ಸಂತಸ ಹಂಚಿಕೊಂಡಳು.

ಮಗಳ ಶ್ರಮ ಸಾರ್ಥಕವಾಗಿದೆ. ಮುಂದೆ ಅವಳಿಚ್ಚೆಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಲಿ. ಸಾಧನೆ ಮುಂದುವರೆಯಲಿ. ನಮ್ಮ ಸಹಕಾರ, ಶಿಕ್ಷಕರ ಮಾರ್ಗದರ್ಶನ ನಿರಂತರವಾಗಿರುತ್ತದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page