ಅಪರಾಧನಮ್ಮೂರುಹುಬ್ಬಳ್ಳಿ- ಧಾರವಾಡ
“ಡಿಸಿಪಿ ರಾಮರಾಜನ್” ವಿರುದ್ಧ ನಾಲಿಗೆ ಹರಿಬಿಟ್ಟವರ ಮೇಲೆ FIR.
ನಾಲಿಗೆ ಹರಿ ಬಿಟ್ಟ ವಿಡಿಯೋ
ಹುಬ್ಬಳ್ಳಿ : ಖಡಕ್ ದಕ್ಷ ಅಧಿಕಾರಿಯಾದ ಡಿಸಿಪಿ ರಾಮರಾಜನ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಅಶೋಕ ಅನ್ವೇಕರ್ ಮೇಲೆ ಡಿಸಿಪಿ ರಾಮರಾಜನ್ ಎಫ್ಐಆರ್ ದಾಖಲು ಮಾಡಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಚೋದಿಸಿದ ವ್ಯಕ್ತಿಯನ್ನು ಬಂಧನ ಮಾಡುವಂತೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಅಶೋಕ ಅನ್ವೇಕರ ಡಿಸಿಪಿ ರಾಮರಾಜನ್ ಅವರಿಗೆ ಅವಾಚ್ಯವಾಗಿ ನಿಂದನೆ ಮಾಡಿದ್ದರು.
ಅವಾಚ್ಯವಾಗಿ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದ ಹಾಗೆ,ಡಿಸಿಪಿ ರಾಮರಾಜನ್ ಅಶೋಕ ಅನ್ವೇಕರ್ ಹಾಗೂ ಕೆಲವು ಹಿಂದೂ ಪರ ಸಂಘಟನೆಯ 100 ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ನವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.