ಮೈಸೂರು: ಬಿಜೆಪಿ ಶಾಸಕರ ಜೊತೆ ಮಾತನಾಡುತ್ತಿದ್ದಾಗಲೇ ಬಿಜೆಪಿ ಮುಖಂಡರು ರಾಯಣ್ಣ ಬ್ರಿಗೇಡ್ ಮುಖಂಡನ ಮೇಲೆ ಹಲ್ಲೇ ಮಾಡಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿಯೇ ಶಾಸಕ ಹರ್ಷವರ್ಧನ್ ಮುಂದೆಯೇ ರಾಯಣ್ಣ ಬ್ರಿಗೇಡ್ ಮುಖಂಡ ಪುಟ್ಟ ಸ್ವಾಮೀ ಮೇಲೆ ಬಿಜೆಪಿ ಮುಖಂಡರು ಹಲ್ಲೇ ಮಾಡಿದ್ದಾರೆ.
ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿರೋ ಕಾರಣ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಲ್ಪ ಹೊತ್ತು ಆತಂಕಗೊಂಡಿದ್ದರು.
ಹಲ್ಲೇ ಆಗುತ್ತಿದ್ದ ಹಾಗೇ ರಾಯಣ್ಣ ಬ್ರಿಗೇಡ್ ಮುಖಂಡ ಪುಟ್ಟಸ್ವಾಮಿ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಅತ್ತ ಕಾಲ್ಕಿತ್ತರೇ, ಶಾಸಕ ಬೆಂಬಲಿಗರು ಹಲ್ಲೇ ಮಾಡುತ್ತಿದ್ದ ಹಾಗೇ ಶಾಸಕರು ಕೂಡಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.