ಪೊಲೀಸರಿಂದ ಸಾರಿಗೆ ಸಂಸ್ಥೆ ಬಸ್ಸುಗಳಿಗೆ ದಂಡ..
ಅಷ್ಟಕ್ಕೂ ಬಸ್ಸಗಳಿಗೆ ದಂಡ ಹಾಕಿರುದಾದರು ಏಕೆ?
ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಸಂಚಾರಿ ಪೋಲಿಸರು ದಂಡ ಹಾಕಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಹೌದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಗದಗ ಮಾರ್ಗದವರಿಗೆ ಇಲ್ಲಿನ ಶಿರಡಿ ಸಾಯಿ ಬಾಬಾ ಗುಡಿ ಹತ್ತಿರ, ಇನ್ನು ವಿಜಯಪುರ ಮಾರ್ಗವಾಗಿ ಹೋಗುವವರಿಗೆ ಕೋರ್ಟ್ ವೃತ್ತದ ಪೆಟ್ರೋಲ್ ಪಂಪ್ ಹತ್ತಿರ ಅವಕಾಶ ಕಲ್ಪಿಸಲಾಗಿದೆ. ಆದರೂ ಸಹಿತ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ನೋ ಪಾರ್ಕಿಂಗ್ ಇದ್ದರು ಕೂಡಾ ಬಸ್ಸಿನ ಚಾಲಕರು ರಸ್ತೆಯ ಮಧ್ಯೆಯೇ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಇದರಿಂದ ಮೊದಲೇ ಜನದಟ್ಟಣೆ ಇರುವ ಪ್ರದೇಶದಲ್ಲಿ ಮತ್ತಷ್ಟು ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಬಗ್ಗೆ ಸಂಚಾರಿ ಪೋಲಿಸರು ಎಷ್ಟೇ ಬಾರಿ ಬಸ್ಸಿನ ಚಾಲಕ, ನಿರ್ವಹಕರಿಗೆ ತಿಳಿಸಿದರು ಕೂಡಾ ಪೋಲಿಸರ ಮಾತಿಗೆ ಕ್ಯಾರೆ ಎನ್ನದ ಬಸ್ಸಿನ ಸಿಬ್ಬಂದಿ ರಸ್ತೆ ಮಧ್ಯೆಯೇ ಬಸ್ಸು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಇದರಿಂದ ರೋಸಿ ಹೋದ ಪೋಲಿಸರು ಇಂದು ಬಸ್ಸುಗಳಿಗೆ ಕೋರ್ಟ್ ನೋಟಿಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಇನ್ನು, ಈ ವೇಳೆ ಸಂಚಾರಿ ಪೋಲಿಸರು ಮತ್ತೆ ಬಸ್ಸಿನ ಸಿಬ್ಬಂದಿ ನಡುವೆ ವಾಗ್ದಾನ ನಡೆದ ಘಟನೆಯು ನಡೆಯಿತು. ನಂತರ ಹಿರಿಯ ಪೋಲಿಸ ಅಧಿಕಾರಿಗಳು ಬಸ್ಸಿನ ಚಾಲಕರಿಗೆ ತಿಳುವಳಿಕೆ ಹೇಳಿ, ನೋಟಿಸ್ ಕೊಟ್ಟು ಕಳಿಸಿದರು.