ಅಪರಾಧಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ
ರೈಲು ಹಳಿ ದಾಟುತ್ತಿದ್ದ ರೈತ ರೈಲಿಗೆ ಬಲಿ..!ಗುಡಗೇರಿ ಗ್ರಾಮದಲ್ಲಿ ದುರಂತ.
ಕುಂದಗೋಳ : ರೈಲು ಹಳಿ ದಾಟುತ್ತಿದ್ದ ರೈತನೊಬ್ಬ ರೈಲಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಗುಡಗೇರಿ ಗ್ರಾಮದಲ್ಲಿ ನಡೆದಿದೆ.
ಗುಡಗೇರಿ ಗ್ರಾಮದ ಜಗದೀಶ ಮುಂಡರಗಿ ಎಂಬ ರೈತ ಹೊಲದಲ್ಲಿ ಕೆಲಸ ಮಾಡಿ ರೈಲು ಹಳಿ ದಾಟುವಾಗ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿಯ ರೈಲ್ವೇ ಪೊಲೀಸರು ಭೇಟಿ ನೀಡಿದ್ದು,ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.