ಅಪರಾಧಚಿತ್ರದುರ್ಗ
ನಾಲ್ಕು ‘ಯುವಕರ’ ಕಾಟಕ್ಕೆ “ಯುವತಿ ಆತ್ಮಹತ್ಯೆ”, ನಾಲ್ಕು ಜನರನ್ನು ಒದ್ದು ಜೈಲಿಗೆ ಹಾಕಿದ ಖಾಕಿ.!
ಚಿತ್ರದುರ್ಗ: ಯುವಕರು ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಗೇ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೊಡಿಹಟ್ಟಿ ಕಾಲೇಜು ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಯುವತಿಗೆ ಅವಾಚ್ಯವಾಗಿ ನಿಂದನೆ,ಕಿರುಕುಳ ನೀಡಿದ್ದರು.
ಹೀಗಾಗಿ ಇವರ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಫ್ಯಾನ್ ಗೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.ಮಗಳ ಸಾವಿಗೆ ಈ ನಾಲ್ಕು ಜನರೇ ಕಾರಣ ಎಂದು ಮೃತ ಯುವತಿಯ ತಂದೆ ಹೊಸದುರ್ಗ ಪಟ್ಟಣದಲ್ಲಿ ಪ್ರತಿಭಟನೆ ಕೂಡಾ ಮಾಡಿದ್ದರು.
ಇದೀಗ ಹೊಸದುರ್ಗ ಠಾಣೆಯ ಪೊಲೀಸರು ಯುವತಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.