ಹುಬ್ಬಳ್ಳಿ:ನಮ್ಮಲ್ಲಿ ವೇದ ಸುಳ್ಳಾದರು ಗಾದೆ ಸುಳ್ಳಾಗಲ್ಲ ಎಂಬ ನಾಣ್ನುಡಿಯಂತೆ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬ ಗಾದೆ ಮಾತು ನಿಜವಾಗಿ ತಮ್ಮನೊಬ್ಬ ಆಸ್ತಿಯ ವಿಚಾರಕ್ಕೇ ಸ್ವತಃ ಒಡ ಹುಟ್ಟಿದ ಅಣ್ಣನ ಕಣ್ಣಿಗೆ ಕಾರದ ಪುಡಿಯನ್ನು ಏರಚಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರೋ ಈತನ ಹೆಸರು ಕಲ್ಲನಗೌಡ ಅಂತಾ ಗಾಮನಗಟ್ಟಿಯ ನಿವಾಸಿ,ಕಳೆದ ಹಲವು ದಿನಗಳಿಂದ ಈತನ ತಮ್ಮನಾದ ಬಸವನಗೌಡನ ಜೊತೆ ಆಸ್ತಿ ವಿಚಾರಕ್ಕೇ ಜಗಳ ನಡೆಯುತ್ತಲೇ ಇತ್ತು,ಗುರುವಾರ ರಾತ್ರಿ ಕಲ್ಲನಗೌಡ ಮನೆಯಲ್ಲಿದ್ದಾಗ ಆತನ ತಮ್ಮ ಬಸವನಗೌಡ ಏಕಾಏಕಿ ಮನೆಗೆ ನುಗ್ಗಿ ಅಣ್ಣನ ಕಣ್ಣಿಗೆ ಕಾರದ ಪುಡಿಯನ್ನು ಏರಚಿ ಅಣ್ಣನಿಗೆ ಚಾಕುವಿನಿಂದ ಮೂರು ಕಡೆ ಇರಿದ ಪರಿಣಾಮ ಕಲ್ಲನಗೌಡ ನೋವಿನಿಂದ ಕೂಗುತ್ತಾ ಬಿದ್ದಿದ್ದಾನೆ.
ಗಂಡನ ದ್ವನಿ ಕೇಳಿ ಬಂದ ಕಲ್ಲನಗೌಡನ ಪತ್ನಿಯ ಮೇಲೆ ಕೂಡಾ ಮೈದುನ ಬಸವನಗೌಡ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದಾಗ ಪಕ್ಕದ ಮನೆಗೆ ಓಡಿ ಹೋಗಿ ಕಲ್ಲನಗೌಡನ ಪತ್ನಿ ಜೀವ ಉಳಿಸಿಕೊಂಡಿದ್ದಾಳೆ, ಕೂಡಲೇ ತೀವ್ರವಾಗಿ ಅಶ್ವಸ್ಥನಾಗಿ ಬಿದ್ದಿದ್ದ ಕಲ್ಲನಗೌಡ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಧ್ಯ ಆತನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಎಸಿಪಿ ವಿನೋದ ಮುಕ್ತೇದಾರ ಕಿಮ್ಸ್ ಆಸ್ಪತ್ರೆಗೆ ಭೇಟಿಯನ್ನು ನೀಡಿ,ಕಲ್ಲನಗೌಡನ ಪತ್ನಿಯಿಂದ ಮಾಹಿತಿ ಪಡೆದು,ಚಾಕು ಇರಿದು ಪರಾರಿಯಾಗಿರುವ ಬಸವನಗೌಡನ ಪತ್ತೆ ಮಾಡುವಂತೆ ನವನಗರ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.