ನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ
ಮಲಕನಕೊಪ್ಪ ಗ್ರಾಮದ ರಂಗಭೂಮಿ ಕಲಾವಿದ “ಮೈಲಾರಿ” ಇನ್ನಿಲ್ಲ..!
ಕಲಘಟಗಿ: ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಖ್ಯಾತ ಯುವ ರಂಗಭೂಮಿ ಕಲಾವಿದ, ಸಂಗೀತ ವಿದ್ವಾಸ ಮೈಲಾರಿ ಹಡಪದ (39) ಗುರುವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಇವರು ಹಲವಾರು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ಭಾಗಗಳಿಗೆ ತೆರಳಿ ರಂಗಭೂಮಿ ಸಾಮಾಜಿಕ ನಾಟಕದಲ್ಲಿ ಕ್ಯಾಶ್ಯೋ, ಹಾರ್ಮೋನಿಯಂ ಮಾಸ್ತರರಾಗಿ ಸೇವೆ ಸಲ್ಲಿಸಿದ ಸಂಗೀತ ಸೇವೆ ಅಪಾರವಾಗಿದೆ. ಗ್ರಾಮದಲ್ಲಿ ಈಗ ಖ್ಯಾತ ಕಲಾವಿದನ ಕಳೆದುಕೊಂಡಿದ್ದು ತುಂಬಲಾರದ ನಷ್ಟವಾಗಿದೆ.