ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದ ನೀರಿನಲ್ಲಿಯೇ ಸಿನಿಮಾ ಶೈಲಿಯಲ್ಲಿ ಬಸ್ ಸಾಗಿಸಿದ ಚಾಲಕ : ಚಾಲಕನ ಧೈರ್ಯಕ್ಕೆ ಉತ್ತರ ಕರ್ನಾಟಕ ಮಂದಿ ಬಹುಪರಾಕ್..!
ಹುಬ್ಬಳ್ಳಿ : ಧಾರವಾಡ ಮತ್ತು ಸವದತ್ತಿ ರಸ್ತೆಯಲ್ಲಿನ ಹೊಲವೊಂದರಲ್ಲಿ ನೀರಿನ ಪೈಪಲೈನ್ ಒಡೆದಿರುವ ಪರಿಣಾಮ ನೀರು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದ ರೋಚಕ ದೃಶ್ಯವಳಿಯನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಮುಖ್ಯ ರಸ್ತೆಯಲ್ಲಿ ನೀರು ಪೋಲಾಗಿ ಮುಗಿಲೆತ್ತರಕ್ಕೆ ಚೆಮ್ಮುತ್ತಿದ್ದನ್ನು ಕಂಡು ವಾಹನ ಸವಾರರು ರಸ್ತೆ ದಾಟಲು ಪರದಾಡುವಂತಾಯಿತು.ಮೊದಲಿಗೆ ಬೊಲೆರೋ ವಾಹನವೊಂದು ಹರಸಾಹಸಪಟ್ಟು ನೀರಿನ ಮಧ್ಯೆ ಸಾಗಿ ಬಂದಿದೆ.
ಆದರೆ ಅಂತಹ ಭಯಾನಕ ಸಂದರ್ಭವಿದ್ದರೂ ಸಹ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದ ನೀರಿನಲ್ಲೆ ಸಾಗಿ ಬಂದಿದ್ದು, ಚಾಲಕನ ಧೈರ್ಯಕ್ಕೆ ಅಲ್ಲಿನ ಸ್ಥಳೀಯರು ಹಾಗೂ ಉತ್ತರ ಕರ್ನಾಟಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಪರಾಕ್ ಎಂದಿದ್ದಾರೆ.
ಸಿನಿಮಾ ಶೈಲಿಯಲ್ಲಿ ಸಾಹಸಮಯವಾದ ದೃಶ್ಯವನ್ನು ಅಲ್ಲಿ ನೆರೆದಿದ್ದ ಜನರು ಕಣ್ತುಂಬಿಕೊಂಡರು.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಘಟನೆ ಗುರುವಾರ ಸಂಜೆ (27 ರಂದು) ನಡೆದಿದೆ ಎನ್ನಲಾಗಿದೆ.