ಯಾದಗಿರಿ : ಪತ್ರಿಕಾ ದಿನಾಚರಣೆ ದಿನವೇ ವಾರ್ತಾ ಇಲಾಖೆಯ ಛಾಯಾಗ್ರಾಹಕನ ಮೇಲೆ ಹಲ್ಲೇ ಮಾಡಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಕಿಲ್ಲಣಕೇರಿ ಗ್ರಾಮದಲ್ಲಿ ಮುಸ್ಲಿಂ ಯುವಕರು ವಾರ್ತಾ ಇಲಾಖೆಯ ಛಾಯಾಗ್ರಾಹಕ ಬೀರಲಿಂಗ್ ಎಂಬುವರ ಮೇಲೆ ಹಲ್ಲೇ ಮಾಡಿದ ಘಟನೆ ನಡೆದಿದೆ.
ಕಿಲ್ಲನಕೇರಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಇರುವ ಭಾವಚಿತ್ರವನ್ನು ತೆರವು ಗೊಳಿಸುವಂತೆ ಎಸ್ಪಿ ಗೇ ಬೀರಲಿಂಗ್ ಮನವಿಯನ್ನು ಮಾಡಿದ್ದರು,ಈ ಹಿನ್ನೆಲೆಯಲ್ಲಿ ಸೈದಾಪುರ ಪೊಲೀಸರು ಟಿಪ್ಪು ಧ್ವಜವನ್ನು ತೆರವು ಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಇದನ್ನೇ ಸಿಟ್ಟನಲ್ಲಿ ಇಟ್ಟುಕೊಂಡ ಕೆಲವು ಮುಸ್ಲಿಂ ಯುವಕರು ವಾರ್ತಾ ಇಲಾಖೆಯ ಛಾಯಾಗ್ರಾಹಕ ಬೀರಲಿಂಗ್ ಮೇಲೆ ಹಲ್ಲೆಯನ್ನು ಮಾಡಿದ್ದು,ಬೀರಲಿಂಗ್ ಗೇ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ