ಹುಬ್ಬಳ್ಳಿ- ಧಾರವಾಡ
“ವೇಶ್ಯಾವಾಟಿಕೆ” ಅಡ್ಡೆ ಮೇಲೆ “ಸಿಸಿಬಿ” ಪೊಲೀಸರ ದಾಳಿ ನಾಲ್ಕು ಜನ ಆರೋಪಿಗಳು ಪೊಲೀಸ್ ವಶಕ್ಕೆ.!
ಧಾರವಾಡ: ವಿದ್ಯಾನಗರಿ ಎಂಬ ಹೆಸರನ್ನು ಪಡೆದ ಧಾರವಾಡದಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿಯನ್ನು ಮಾಡಿ. ನಾಲ್ಕು ಜನ ಆರೋಪಿಗಳನ್ನು ಬಂದನ ಮಾಡಿ ಓರ್ವ ಅಂತರಾಜ್ಯದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚೆನ್ನಮ್ಮ ನಗರದಲ್ಲಿನ ಬಾಡಿಗೆ ಮನೆಯಲ್ಲಿ. ಮಹಾರಾಷ್ಟ್ರ ಮೂಲದ ಯುವತಿಯನ್ನು ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ದಾಳಿಯನ್ನು ಮಾಡಿದ್ದು.
ಸದ್ಯ ನಾಲ್ಕು ಜನ ಆರೋಪಿಗಳನ್ನು ಬಂದನ ಮಾಡಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ಮೇಲೆ ಕೂಡಾ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು,ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸುವ ಕಾರ್ಯವನ್ನು ಮಾಡಿದ್ದಾರೆ.