ಕೊಪ್ಪಳ : ಅಧಿಕಾರಿಗಳು ಅಂದರೇ ಸಾಕು ಅದೇನೋ ದರ್ಪ ದೌಲತ್ತು,ಅದರಲ್ಲೇ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂದ್ರೆ ಕೇಳಬೇಕಾ,ಆದ್ರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿ ಇರುವಂತಹ ಅಧಿಕಾರಿ.
ಕೊಪ್ಪಳ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರೋ ವಿಶ್ವನಾಥ ಹಿರೇಗೌಡರ್ ತುಂಬಾ ಅಪರೂಪದ ಇನ್ಸ್ಪೆಕ್ಟರ್, ಯಾವುದೇ ಆಮಿಷ ಒತ್ತಡಕ್ಕೆ ಒಳಗಾಗದೇ ಸಮಾಜ ಒಳ್ಳೆಯದಾಗಿರಬೇಕು ಅದಕ್ಕಾಗಿ ಜನರಿಗೆ ಅರಿವನ್ನು ಮೂಡಿಸಿವ ಮೂಲಕ ಕೊಪ್ಪಳ ಜಿಲ್ಲೆಯಾದ್ಯಂತ ಇವರು ಪ್ರಖ್ಯಾತಿ ಪಡೆದಿರೋ ಅಧಿಕಾರಿ.
ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ತೆರಳಿ ಕುಡಿತದಿಂದ ಆಗುವ ಅದೆಷ್ಟೋ ದುಷ್ಪರಿಣಾಮಗಳನ್ನು ಜನರಿಗೆ ದೃಶ್ಯ ಮಾಧ್ಯಮದ ಮೂಲಕ ತೋರಿಸಿ ಅವರ ಬದುಕಿನಲ್ಲಿ ಬದಲಾವಣೆ ಆಗುವ ರೀತಿಯಲ್ಲಿ ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ.