ಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದೇವರು ಹಾವು ಪ್ರತ್ಯಕ್ಷ..!
ಹುಬ್ಬಳ್ಳಿ : ಹಾವು ಬಂತು ಹಾವು ಎಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬೃಹದಾಕಾರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದನ್ನು ಕಂಡು ಅಲ್ಲಿನ ಸಿಬ್ಬಂದಿಗಳು ಆತಂಕಗೊಂಡ ಘಟನೆ ನಡೆಯಿತು.
ಇಲ್ಲಿನ ದುರ್ಗಾದೇವಿ ದೇವಸ್ಥಾನದ ಬಳಿ ಪತ್ತೆಯಾದ ಬೃಹದಾಕಾರದ ನಾಗರಹಾವನ್ನು ನೋಡಿ ಜನರು ಕಕ್ಕಾಬಿಕ್ಕಿಯಾದ ಘಟನೆ ಕಳೆದೆರೆಡು ದಿನಗಳ ಹಿಂದೆ ನಡೆದಿದೆ.
ಇಲ್ಲಿನ ಜನತೆ ದುರ್ಗಾದೇವಿಯ ದೇವರ ಹಾವೆಂದು ನಂಬಿದ್ದು,
ಇಲ್ಲಿನ ಸಿಬ್ಬಂದಿಗಳು ಬೃಹದಾಕಾರದ ಈ ದೇವರಹಾವನ್ನು ನೋಡಿ ಗಾಬರಿಗೊಂಡು ಅಲ್ಲಿನ ಸಿಬ್ಬಂದಿಗಳು ತಕ್ಷಣ ಉರಗ ರಕ್ಷಕ ಸ್ನೇಕ್ ಸಂಗಮೇಶ ಅವರಿಗೆ ಕರೆ ಮಾಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಂಗಮೇಶ ಬೃಹದಾಕಾರ ದೇವರಹಾವನ್ನು ಸುರಕ್ಷಿವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.
ನಂತರ ಇಲ್ಲಿನ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಯಿತು.